ಹುಡುಕಿ

ಶುಭಸಂದೇಶದ ಹಾಳೆಗಳು ತೆರೆದುಕೊಂಡ ಹೊತ್ತಿನಲ್ಲೆ ಪೋಪ್ ಫ್ರಾನ್ಸಿಸ್ ಅವರಿಗೆ ನಲ್ಮೆಯ ವಿದಾಯ

ನಮ್ಮ ಸಂಪಾದಕೀಯ ನಿರ್ದೇಶಕರಾದ ಅಂದ್ರೇಯ ತೊರ್ನಿಯೆಲ್ಲಿ ಅವರು ಪೋಪ್ ಫ್ರಾನ್ಸಿಸ್ ಅವರ ಅಂತಿಮ ಬಲಿಪೂಜೆಯಂದು ಅವರ ಕುರಿತ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ವರದಿ: ಅಂದ್ರೇಯ ತೊರ್ನಿಯೆಲ್ಲಿ

ನಮ್ಮ ಸಂಪಾದಕೀಯ ನಿರ್ದೇಶಕರಾದ ಅಂದ್ರೇಯ ತೊರ್ನಿಯೆಲ್ಲಿ ಅವರು ಪೋಪ್ ಫ್ರಾನ್ಸಿಸ್ ಅವರ ಅಂತಿಮ ಬಲಿಪೂಜೆಯಂದು ಅವರ ಕುರಿತ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

20 ವರ್ಷಗಳ ಹಿಂದೆ ಏಪ್ರಿಲ್ 25 ರಂದು ಅಂದಿನ ಜಗದ್ಗುರುಗಳಾದ ವಿಶ್ವಗುರು ಸಂತ ದ್ವಿತೀಯ ಜಾನ್ ಪೌಡರ್ ದೈವಿಕ ಕರುಣೆಯ ಭಾನುವಾರದ ಹಿಂದಿನ ದಿನ ಮೃತರಾದರು. ದಶಕಗಳ ನಂತರ ಇದೇ ದಿನ ಸಾವಿರಾರು ಭಕ್ತಾದಿಗಳು ವಿಶ್ವಗುರು ಫ್ರಾನ್ಸಿಸ್ ಅವರಿಗೆ ಅಂತಿಮ ವಿಧಾಯವನ್ನು ಹೇಳುತ್ತಿದ್ದಾರೆ.

ಸಂತ ಪೇತ್ರರ ಚೌಕದಲ್ಲಿ ನನಗೆ ಕಂಡಿದ್ದು ಒಂದು ಸರಳ ಶವಪೆಟ್ಟಿಗೆ ಹಾಗೂ ಅದರ ಮೇಲೆ ಇಟ್ಟಿದ್ದ ಶುಭ ಸಂದೇಶದ ಪುಸ್ತಕ. ಗಾಳಿ ಬೀಸುತ್ತಿದ್ದಂತೆ ಶುಭ ಸಂದೇಶದ ಹಾಳೆಗಳು ಸರಿಯುತ್ತಿದ್ದವು.

ವಿಶ್ವಗುರು ಫ್ರಾನ್ಸಿಸ್ ಅವರ ಅಂತಿಮ ಸಂಸ್ಕಾರವು ಒಂದು ಅತ್ಯಂತ ಹೃದಯ ಸ್ಪರ್ಶಿ ಶೋಕ ಭರಿತ ಹಾಗೂ ಅತ್ಯಂತ ಪ್ರಾರ್ಥನಾ ಕುರಿತ ಸಮಯವಾಗಿತ್ತು. ಈಸ್ಟರ್ ಭಾನುವಾರದಂದು ಅವರನ್ನು ಭೇಟಿಯಾಗಿದ್ದ ಅನೇಕ ಜನಗಳು ಒಂದು ವಾರದ ಅವಧಿಯಲ್ಲಿ ಅವರಿಗೆ ಅಂತಿಮ ವಿದಾಯಗಳನ್ನು ಸಲ್ಲಿಸುತ್ತೇವೆ ಎಂಬುದನ್ನು ಊಹಿಸಿಯೂ ಇರುವುದಿಲ್ಲ.

ವಿಶ್ವಗುರು ಫ್ರಾನ್ಸಿಸ್ ಅವರ ಅಂತಿಮ ಸಂಸ್ಕಾರರಲ್ಲಿ ಕೇವಲ ಧರ್ಮ ಸಭೆಯ ಧರ್ಮಧ್ಯಕ್ಷರುಗಳು ಕಾರ್ಡಿನಲ್ಲುಗಳು ಗುರುಗಳು ಅಥವಾ ಕನ್ಯಾ ಸ್ತ್ರೀಯರು ಭಾಗವಹಿಸಲಿಲ್ಲ. ಕೇವಲ ದೇಶಗಳ ಮುಖ್ಯಸ್ಥರುಗಳು ಭಾಗವಹಿಸಲಿಲ್ಲ. ಇವರೆಲ್ಲರ ಜೊತೆಗೆ ರೋಮ್ ನಗರಕ್ಕೆ ಹದಿಹರೆಯದವರ ಜುಬಿಲಿಗಾಗಿ ಬಂದಿದ್ದ ಸಾವಿರಾರು ಯುವಜನತೆಯು ವಿಶ್ವಗುರು ಫ್ರಾನ್ಸಿಸ್ ಅವರಿಗೆ ಅಂತಿಮ ನಮನವನ್ನು ಸಲ್ಲಿಸಿದರು.

ಇತರ ಕ್ರೈಸ್ತ ಪಂಗಡಗಳ ನೂರಾರು ಮುಖ್ಯಸ್ಥರುಗಳು ಇಲ್ಲಿಗೆ ಆಗಮಿಸಿದ್ದು ಅವರೆಲ್ಲರೂ ಶುಭ ಸಂದೇಶಕ್ಕೆ ನ್ಯಾಯಯುತವಾಗಿ ನಡೆದುಕೊಂಡ ಕುರಿಗಾಹಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಸದಾ ಸೋದರತೆಯನ್ನು ಜನರಿಗೆ ಬೋಧಿಸುತ್ತಿದ್ದ ವಿಶ್ವಗುರು ಫ್ರಾನ್ಸಿಸ್ ಅವರ ಅಂತಿಮ ಸಂಸ್ಕಾರದಲ್ಲಿ ಎಲ್ಲರೂ ಒಟ್ಟಾಗಿ ಸೇರಿದ್ದರು.

ಕಾರ್ಡಿನಲ್ ಜಿವಾನಿ ಬತ್ತಿಸ್ಥರೇ ಅವರು ತಮ್ಮ ಪ್ರಬೋಧನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರ ಕುರಿತು ಮಾತನಾಡುವಾಗ ವಿಶೇಷವಾಗಿ ಹೇಗೆ ಅವರು ಧರ್ಮಸಭೆಯನ್ನು ಎಲ್ಲರಿಗೂ ಬೇಕಾದಂತಹ ಮನೆ ಯನ್ನಾಗಿ ಪರಿವರ್ತಿಸಿದರು ಎಂದು ಹೇಳುವಾಗ ನೆರೆದಿದ್ದ ಜನರೆಲ್ಲರೂ ಚಪ್ಪಾಳೆ ತಟ್ಟಿದರು.

ವಿಶ್ವಗುರು ಫ್ರಾನ್ಸಿಸಬರು ಎಲ್ಲರಿಗೂ ಮುಕ್ತವಾಗಿದ್ದ ಧರ್ಮಸಭೆಯನ್ನು ಕಟ್ಟಲು ಅಪೇಕ್ಷಿಸಿದರು. ಅವರ ಪಾಲನಾ ಸೇವೆಯಲ್ಲಿ ಬಡವರು ಅತ್ಯಂತ ಪ್ರಮುಖ ಜನತೆಯಾಗಿದ್ದರು. ಅಂತೆಯೇ ಅವರು ರೋಮ್ ನಗರದ ಜನತೆಯ ಪಾಲಕಿಯಾಗಿರುವ ಸಂತ ಮೇರಿ ಮೇಜರ್ ಮಹಾ ದೇವಾಲಯದಲ್ಲಿ ತಮ್ಮ ಆರ್ಥಿಕ ಶರೀರವನ್ನು ಅಡಕ ಮಾಡಬೇಕು ಎಂದು ತಮ್ಮ ಕೊನೆಯ ಹೇಳಿಕೆಯಲ್ಲಿ ಬರೆದಿದ್ದರು. ಆ ಮೂಲಕ ಅವರು ಸಾವಿನಲ್ಲು ಸರಳತೆಯನ್ನು ಹಾಗೂ ದೀನತೆಯನ್ನು ತೋರಿಸಿದ್ದಾರೆ.

28 ಏಪ್ರಿಲ್ 2025, 16:28